ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಮೈಸೂರು, ಮಂಡ್ಯ, ಕೋಲಾರ ಮತ್ತು ಬೆಂಗಳೂರು ನಗರ ಪ್ರದೇಶಗಳ ಜನ ಕುಡಿಯುವ ನೀರಿಗಾಗಿ ಕಾವೇರಿ ನದಿ ನೀರನ್ನೇ ಅವಲಂಬಿಸಿದ್ದಾರೆಂದು ಗೊತ್ತಿದ್ದಾಗ್ಯೂ ಸಿದ್ದರಾಮಯ್ಯ ತಮಿಳುನಾಡುಗೆ ನೀರು ಬಿಟ್ಟಿದ್ದಾರೆ. ಆ ರಾಜ್ಯದ ಜಲಾಶಯಗಳಲ್ಲಿ ಸಾಕಷ್ಟು ನೀರಿದೆ, ಕುಡಿಯುವ ನೀರಿಗಾಗಿ ಅಲ್ಲಿ ಹಾಹಾಕಾರವೆದ್ದಿದ್ದರೆ ನೀರು ಬಿಡುವುದು ತಪ್ಪಲ್ಲ, ನಾವು ಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲೆವು, ತಮಿಳುನಾಡು ಪಾಕಿಸ್ತಾನವೇನೂ ಅಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.